ಖರ್ಜೂರದ ಎಲೆ
ಅಲ್ಲಾಡುವುದನ್ನೂ
ತಿಳಿಸಬೇಕೆಂದು
ಹಠ ಹಿಡಿಯುವ ಹೆಣ್ಣೇ
ನಿನ್ನಲ್ಲಿ ನಾನೆಷ್ಟು ಸತ್ಯಗಳನ್ನು
ಸಮರ್ಥವಾಗಿ ಅಡಗಿಸಿಟ್ಟೆನು
ಹಲವು ಸಲ ಪ್ರಯೋಗಿಸಿ
ಸವೆದು ಹೋದ
ಸುಖವೆಂಬ ಪದ ಮತ್ತೊಮ್ಮೆ
ಸಾಲ ತೆಗೆದು
ಹೇಳಲೇ ನಾನು
"ನನಗಿಲ್ಲಿ ಸುಖವೆಂದು"
ನನ್ನಲ್ಲಿ ನೀ ಹೇಳಿದ
ಮಾತು
ಮತ್ತೊಮ್ಮೆ ಪ್ರತಿದ್ವನಿಸುತ್ತಿದೆ
ಕಿವಿಗಳಲ್ಲಿ
ನೀವಿಲ್ಲದ ರಂಜಾನ್ ಕಾಲ
ಅಮ್ಮ ಇಲ್ಲದ ಮನೆಯಂತೆ
ವ್ರತ ಮುರಿಯಲು
ಖರ್ಜೂರ ತೆಗೆದಿರಿಸುವಾಗ
ನೆನಪಿಸು ನೀ ನನ್ನ
ಕಾರಣ
ನಾನೀಗ ಖರ್ಜೂರದ
ಊರುಗಾರನಲ್ಲ .......

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ