ಭಾನುವಾರ, ಆಗಸ್ಟ್ 4, 2013

ಬಿಳ್ಕೊಡುಗೆ


ಓ ಅತಿಥಿ.......
ಭಾರವಾಗುತಿದೆ  ಮನವು
ಆಧ್ರ ವಾಗುತಿದೆ
ಕಣ್ಣು ಗಳೆರಡೂ
ಬೇಗುತಿದೆ ಹ್ರದಯ
ನಿನ್ನ ಬಿಳ್ಕೊಡಲು

ಓ ಅತಿಥಿ.......
ನೀ ಬಂದೆ ಸೌಭಾಗ್ಯವಾಗಿ
ನೀ ತಂದೆ ಸೌಜನ್ಯವಾಗಿ
ಉಡುಗೊರೆಗಳನ್ನ
ಕಾರುಣ್ಯಕ್ಕಾಗಿ ಹತ್ತು
ಕ್ಷಮಾಪನೆಗಾಗಿ  ಹತ್ತು
ನರಕ ಮೋಚನೆಗಾಗಿ
 ಹತ್ತು..

ಓ ಅತಿಥಿ......
ಎಡವಿದೆನು ನಾ
ನಿನ್ನ ಸತ್ಕರಿಸಲು
ನೀ ಸಾಕ್ಷಿ ನುಡಿಯುವದಿನ
ಕಡೆಗಣಿಸದಿರು ಈ ನನ್ನ
ಬೇಡುವೆನು ಜಗದೊಡಯನಲ್ಲಿ
ಕರುಣಿಸು ನಮಗೆ ಹಲವಾರು
ಅವಸರಗಳನ್ನ  ಸತ್ಕರಿಸಲು ನಿನ್ನ

ಓ ಅತಿಥಿ......
ಇನ್ನೆಲ್ಲಿದೆ ಅತ್ತಾಳದ ಸಂಭ್ರಮ
ಇನ್ನೆಲ್ಲಿದೆ ಇಫ್ತ್ಹಾರಿನ ಸಂತಸ
ಇನ್ನೆಲ್ಲಿದೆ ತರಾವೀಹ್ ನ ಸಂಗಮ
ಇನ್ನೆಲ್ಲಿದೆ ಕಿಯಾಮುನ್ ಲೈಲ್ ನ 
ಸಮಾಪನ

ಓ ಅತಿಥಿ ...
ನಿನ್ನ ಬಿಳ್ಕೊಡುವ ಮುನ್ನ
ಪ್ರಾರ್ಥನೆ ಒಂದಿದೆ ನನ್ನ
ಸರ್ವ ಶಕ್ತನಲ್ಲಿ
ಮರಣವು ಸುನಿಶ್ಚಿತವು ನನಗೆ
ಎಂದಾದರು ಒಂದು ದಿನ
ಆಗಲಿ ಅದು ನಿನ್ನ ಮಡಿಲಲ್ಲಿ
ಅಮ್ಮನ ಮಡಿಲಲ್ಲಿ
ಕಂದಮ್ಮನ ನಿದ್ದೆಯಂತೆ
ಆಗಲಿ ಅದು ಲೈಲತ್ತುಲ್ ಕದಿರಿನ ರಾತ್ರಿ
ಆಗಲಿ ಅದು ಜಗನ್ನಾಥನಿಗೆ  ಸಾಷ್ಟಾಂಗ
ಎರಗಿದ ಆ ಶುಭ ಸಮಯ

ಓ ಅತಿಥಿ......
ಯಾರು ಯಾರಿಗೆ
ವಿದಾಯ ಹೇಳುತ್ತಿರುವುದು
ಇಲ್ಲಿ
ಗೊತ್ತಿಲ್ಲ ನನಗೆ
ನಾ ನಿನಗೋ ಅಲ್ಲ
ನೀ ನನಗೋ
ನೀ ಮರಳಿ ಬರುವಾಗ
ಬಾಕಿ ಇರಬಹುದೇ
ಈ ದೇಹವೂ ಈ ದೇಹಿ ಯೂ ..!!!





ಖರ್ಜೂರದ ನಾಡಲ್ಲಿ ಕುಳಿತು


ಖರ್ಜೂರದ ಎಲೆ
ಅಲ್ಲಾಡುವುದನ್ನೂ
ತಿಳಿಸಬೇಕೆಂದು
ಹಠ ಹಿಡಿಯುವ ಹೆಣ್ಣೇ
ನಿನ್ನಲ್ಲಿ ನಾನೆಷ್ಟು ಸತ್ಯಗಳನ್ನು
ಸಮರ್ಥವಾಗಿ ಅಡಗಿಸಿಟ್ಟೆನು

ಹಲವು ಸಲ ಪ್ರಯೋಗಿಸಿ
ಸವೆದು ಹೋದ
ಸುಖವೆಂಬ ಪದ ಮತ್ತೊಮ್ಮೆ
ಸಾಲ ತೆಗೆದು
ಹೇಳಲೇ ನಾನು
"ನನಗಿಲ್ಲಿ ಸುಖವೆಂದು"

ನನ್ನಲ್ಲಿ ನೀ ಹೇಳಿದ
ಮಾತು
ಮತ್ತೊಮ್ಮೆ  ಪ್ರತಿದ್ವನಿಸುತ್ತಿದೆ
ಕಿವಿಗಳಲ್ಲಿ
ನೀವಿಲ್ಲದ ರಂಜಾನ್ ಕಾಲ
ಅಮ್ಮ ಇಲ್ಲದ ಮನೆಯಂತೆ

ವ್ರತ ಮುರಿಯಲು
ಖರ್ಜೂರ ತೆಗೆದಿರಿಸುವಾಗ
ನೆನಪಿಸು ನೀ ನನ್ನ
ಕಾರಣ
ನಾನೀಗ ಖರ್ಜೂರದ
ಊರುಗಾರನಲ್ಲ .......