ಮಂಗಳವಾರ, ಜುಲೈ 9, 2013

ಇಶ್ರಥ್ ಜಹಾನ್

ಅವಳೆದ್ದಳು
ಎಂದಿನಂತೆ ಅಂದೂ
ಅರಿವಿಲ್ಲದೆ
ಎದ್ದಿರುವುದು
ಇನ್ನೆಂದೂ ಎದ್ದೇಳದ
ಚಿರನಿದ್ದೆಗೆಂದು

ಅಕಾರಣ
ಅವಳೆದೆಗೆ ಗುಂಡಿಕ್ಕಿ
ಬಿಸಿ ರಕ್ತವ  ಕುಡಿದು ತೇಗಿದರು
ಅಸುರ ಜನ್ಮಗಳು
ಕಾರಣವಿಷ್ಟೇ
ಅವಳ ಹೆಸರಲ್ಲಿತ್ತು
ಇಶ್ರಥ್ ಜಹಾನ್

ಕಾರಣಕರ್ತ
ಇಂದಿಗೂ
ಒಂದು ಪಟ್ಟದಲ್ಲಿ ಕುಳಿತು
ಇನ್ನೊಂದು ಪಟ್ಟಾಭಿಷೇಕ್ಕಕ್ಕಾಗಿ
ಹಾತ್ತೊರೆಯುತ್ತಿರುವವನು .








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ